ಬಾ ಮತ್ತೊಮ್ಮೆ

ಪಕ್ಷಗಳು ಕುದಿಯುತಿವೆ ರಾಜಕೀಯ ಕುಲುಮೆಯಲಿ
ಆಕಾರಕ್ಕೆ ಬರದೆ ಮತ್ತೆ ಮತ್ತೆ ಬೀಳುತಲಿವೆ
ಅಸತ್ಯದ ಕುಲುಮೆಯೊಳಗೆ
ಸುತ್ತಿಗೆ ಹಿಡಿದು ಮತ್ತೊಮ್ಮೆ
ಬರಬಾರದೇ ನೀನು ‘ಕಮ್ಮಾರನಾಗಿ’
ಜಾತಿ ಮತ ಕುಲ ಧರ್ಮಗಳ
ಹೆಸರಿನಲಿ ಹುಟ್ಟಿಸುತಿಹರು ಹೊಸ ಹೊಸ
ಪಕ್ಷಗಳು ಗಂಟಲು ಹರಿದು ಕಿರುಚಿತಿಹರು
ಪಕ್ಷಗಳ ನೇತಾರರು
ಮೋಸ ಮಾಡುತಿವೆ ಬಡವರಿಗೆ
ಮೋಡಿ ಹಾಕುವ ಆಶ್ವಾಸನೆಯ ಭರವಸೆಗಳು
ಭಾವನೆಗಳಿಗೆ ಬೆಲೆ ಕೊಡದೆ
ಮತ ಗಳಿಸುವ ಕದೀಮರನೊಯ್ದು
ಚಿಲುಮೆಗೊಮ್ಮೆ ನೂಕಲು ಕರಕಾಗಿಸಲು
ಮತ್ತೊಮ್ಮೆ ಬರಬಾರದೇ ನೀನು….
ಬಾಂಬುಗಳಿಗೆ ಹತರಾಗುತ ನೋವಿನಲಿ ನಲಗುತ
ಮಾತನಾಡಲಾಗದವರ ಬಂಡೇಳದವರ
ಹಸಿದವರ ಬೆವರು ಹರಿಸುವವರ
ಕಾಲು ಕಸವಾಗುವವರ ಬೆಲೆಯೇ ಇಲ್ಲದವರ
ಕನಸುಗಳು ಕುಸಿಯುತಿವೆ.
‘ಬರುತ್ತಿಲ್ಲ ಈಗ ಸಾಂತ್ವನಕ್ಕೆ
ನಿನ್ನ ಸತ್ಯದ ಅಹಿಂಸೆಯ ಮಾತುಗಳು
ಹೋದವೆಲ್ಲಿ ನಿನ್ನ ಸತ್ಯ ಅಹಿಂಸೆಯ ಕ್ರಾಂತಿಗಳು’
ಅನರ್ಥಗಳಿಗೆ ಹಪಹಪಿಸುವ
ಚುನಾವಣೆ ಪ್ರಜಾಪ್ರಭುತ್ವಕ್ಕೆ ಹೊಡೆದಾಡುವ
ಈ ರಾಜಕೀಯ ಕ್ರಾಂತಿಗಳು ತೋಳ
ಕುರಿಯಾಟಗಳ ರಕ್ತಕ್ರಾಂತಿಗಳಾಗುತಲಿವೆ
ಬಿಡು ಇನ್ನು ಮೌನ ಹಿಡಿ ಇನ್ನು ಸುತ್ತಿಗೆ
ಕೊಡು ಇನ್ನು ಪೆಟ್ಟು ಬಾ ಮತ್ತೊಮ್ಮೆ…
ಮಾಂಸ ಮೃಷ್ಟಾನ್ನ ಭೋಜನದ ಬೊಜ್ಜುಗಾರರಿಗೆ
ಏರ್ ಕಂಡೀಷನ್‌ದ ಮೋಜುಗಾರರಿಗೆ
ಅಧಿಕಾರ ಮದದ ಗೂಳಿ ಗೂಂಡಾಗಳಿಗೆ
ಗುಂಡಿನ ಲಾಬಿಗಳಲಿ ಹೊರಳಾಡುವ ಹೆಗ್ಗಣ ಹದ್ದುಗಳಿಗೆ
ಧರ್ಮದ ನೆಪ ಧರ್ಮಾಂಧರಿಗೆ
ಸಮಯ ಸಾಧಕರಿಗೆ ಪಕ್ಷಾಂತರಿಗಳನೆಲ್ಲ
ಚಿಲುಮೆಯಗ್ನಿಯಲಿ ಹಾಕು ಸುಡು
ಕುಲುಮೆಯಲಿ ಕಾಯಿಸಿ ಕರಗಿಸಿ
ಸುತ್ತುಗೆಯಿಂದ ಹೊಡೆ ಹೊಡೆದು
ರೂಪ ಕೊಡಲು ಬಾ ಮತ್ತೊಮ್ಮೆ
ದೇಶಕ್ಕೆ ಕಮ್ಮಾರನಾಗಿ
ಕೇಳಿಸಲಿ ಮತ್ತೊಮ್ಮೆ ಆ
ಚಮ್ಮಟೆ ಧ್ವನಿ ದೇಶದೊಳ ಹೊರಗೆಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಬೀಡ್ಸಿನಲ್ಲಿ ರಸ್ತೆ ದಾಟುವುದು
Next post ಲವ್ವು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys